ಕುಂಬಳೆ
ಉಪಜಿಲ್ಲೆಯ ಶಾಲಾ ಕಲೋತ್ಸವ 2014
ಇದರ ಸಂಘಟಕ
ಸಮಿತಿ ರೂಪೀಕರಣ ಸಭೆಯು ದಿನಾಂಕ
13.10.2004 ರಂದು
ನಡೆಯಿತು.ಕಾರಡ್ಕ
ಬ್ಲೋಕ್ ಪಂಚಾಯತು ಅಧ್ಯಕ್ಷರಾದ
ಶ್ರೀ ಬಿ.ಎಂ.ಪ್ರದೀಪ್
ಸಮಾರಂಭವನ್ನು ಉದ್ಘಾಟಿಸಿದರು.ಜಿಲ್ಲಾಪಂಚಾಯತು
ಸದಸ್ಯರಾದ ಶ್ರೀ ತಿಮ್ಮಯ್ಯ
ಶುಭಾಶಂಸನೆಗೈದರು.ಬೆಳ್ಳೂರು
ಗ್ರಾಮಪಂಚಾಯತು ಉಪಾಧ್ಯಕ್ಷರಾದ
ಶ್ರೀಮತಿ ಶಾರದ,
ಸದಸ್ಯರುಗಳಾದ
,ಶ್ರೀ
ಶ್ರೀಪತಿ ಕಡಂಬಳಿತ್ತಾಯ,ಶ್ರೀ
ಪಿ.ಕೆ.ಶೆಟ್ಟಿ,
ಶ್ರೀಮತಿ
ಮಾಲತಿ ಜೆ .ರೈ,ಶ್ರೀ
ಶ್ರೀಧರ ಮತ್ತು ಕಾರಡ್ಕ ಗ್ರಾಮ
ಪಂಚಾಯತು ಸದಸ್ಯರಾದ ಶ್ರೀ ರತ್ನಾಕರ,
ಕಾರಡ್ಕ
ಬ್ಲೋಕ್ ಪಂಚಾಯತು ಸದಸ್ಯರಾದ
ಶ್ರೀಮತಿ ರೇಣುಕಾದೇವಿ ಹಾಗೂ
ಶ್ರೀಮತಿ ಉಷಾ ಶುಭಹಾರೈಸಿದರು.ರಾಜಕೀಯ
ನೇತಾರರಾದ ಶ್ರೀ ಕಲ್ಲಗ ಚಂದ್ರಶೇಖರ
ರಾವ್ ,ಶ್ರೀ
ಸುಬ್ರಹ್ಮಣ್ಯ ಭಟ್ ,
ಶ್ರೀ
ಅಬ್ಬಾಸ್ಅಲಿ ,ಶ್ರೀ
ಶಿಜಿ ಕಾರ್ಯಕ್ರಮದ ಯಶಸ್ಸಿಗಾಗಿ
ಎಲ್ಲರೂ ಒಂದುಗೂಡಿ ಪ್ರಯತ್ನಿಸಬೇಕು
ಎಂದು
ಕರೆ ನೀಡಿದರು.ಸಭೆಯಲ್ಲಿ
,ಪಿ.ಟಿ.ಎ
ಅಧ್ಯಕ್ಷರಾದ ಶ್ರೀ ಬಾಬು ಅನೆಕ್ಕಳ
,ಎಸ್.ಎಂ.ಸಿ
ಅಧ್ಯಕ್ಷರಾದ ಶ್ರೀ ಕೆ.ಮೊಹಮ್ಮದ್
ಹಾಜಿ ಉಪಸ್ಥಿತರಿದ್ದರು.
ದಿನಾಂಕ
18.11.2014 ರಿಂದ 22.11.2014 ರವರೆಗಿನ
ದಿನಗಳಲ್ಲಿಕಲೋತ್ಸವವನ್ನು
ನಡೆಸಲು ತೀರ್ಮಾನಿಸಲಾಯಿತು.
ಕಾರ್ಯಕ್ರಮದ
ಯಶಸ್ಸಿಗೆ ಸಂಘಟಕ ಸಮಿತಿ
ರೂಪೀಕರಿಸಲಾಯಿತು.ಕುಂಬಳೆ
ಉಪಜಿಲ್ಲಾ ಶಿಕ್ಷಣಾಧಿಕಾರಿಯಾದ
ಶ್ರೀ ಕೈಲಾಸ ಮೂರ್ತಿ ಮಾತನಾಡುತ್ತಾ
ಮಕ್ಕಳ ಈ ಕಲಾಮೇಳಕ್ಕೆ ಪ್ರತಿಯೊಬ್ಬರೂ
ತಮ್ಮ ಕೊಡುಗೆಯನ್ನು ನೀಡಬೇಕೆಂದು
ವಿನಂತಿಸಿದರು.ಬೆಳ್ಳೂರು
ಗ್ರಾಮಪಂಚಾಯತು ಅಧ್ಯಕ್ಷರಾದ
ಶ್ರೀ ಎ.ಕೆ
ಕುಶಲ ಸಮಾರಂಭದ ಅಧ್ಯಕ್ಷತೆ
ವಹಿಸಿದ್ದರು.
ಪ್ರಭಾರ
ಪ್ರಾಂಶುಪಾಲರಾದ ಶ್ರೀ ಸದಾನಂದನ್
ಮಾಸ್ತರ್ ಸ್ವಾಗತಿಸಿ ಕಾರ್ಯಕ್ರಮದ
ರೂಪುರೇಖೆಗಳನ್ನು ಮಂಡಿಸಿದರು.ಶಾಲಾ
ಮುಖ್ಯೋಪಾಧ್ಯಾಯ ರಾದ ಶ್ರೀ
ಮಹಾಲಿಂಗೇಶ್ವರ ಭಟ್ ವಂದಿಸಿದರು.
No comments:
Post a Comment